ಒಮ್ಮೆ, ಐಮಂಗಲದ ಅಭಿಲಾಷ್ ಪಂಡರಹಳ್ಳಿ ಅವರು ಕಾರ್ಯಕ್ರಮವೊಂದಕ್ಕೆಂದು ಹಿರಿಯೂರಿನ ಬಬ್ಬೂರು ಫಾರ್ಮ್ಗೆ ಹೋದಾಗ, ಅವರ ಕಣ್ಣಿಗೆ ಬಿದ್ದ ಒಂದು ಪುಸ್ತಕದ ಬಗ್ಗೆ ನನಗೆ ತಿಳಿಸಿದ್ದರು. ಅದಾದ ನಂತರ ಆ ಪುಸ್ತಕವನ್ನು ಅವರು ಮತ್ತು ನಿಶಾಂತ್ ಪ್ರಧಾನಿಯವರು ಓದಲು ಎರವಲು ಪಡೆದುಕೊಂಡಿದ್ದರಂತೆ. ಆಗ ನನಗೂ ಈ ಪುಸ್ತಕವನ್ನು ಓದಲು ಅವಕಾಶ ಸಿಕ್ಕಿತ್ತು.
ರೈತರ ನೆಚ್ಚುಮೆಚ್ಚಿನ ಮರಗಳು, ರೈತರಿಗೆ ಬೇಕೇ ಬೇಕಾದ ಹಲವು ಮರಗಳ ಜೊತೆಗೆ, ರೈತರು ಬೆಳೆಸಿದರೆ ಅವರಿಗೆ ಎಲ್ಲೆಡೆಯಿಂದ ಏಳಿಗೆ ಆಗುವಂತಹ ಕೆಲವು ಮರಗಳ ಬಗ್ಗೆಯೂ ಈ ಪುಸ್ತಕ ತಿಳಿಸುತ್ತದೆ. ಹಾಗಾಗಿ, ಇದು ಪ್ರತಿಯೊಬ್ಬ ರೈತರ ಮನೆಯಲ್ಲೂ ಇರಲೇಬೇಕಾದ ಪುಸ್ತಕ.
sampada.net/s/e3t