ನಮ್ಮ ರೈತರಿಗಾಗಿ ಬೃಹತ್ ಪಾದಯಾತ್ರೆ: ಜೂನ್ 21, 2026
ಬಿಡದಿ ಟೌನ್ಶಿಪ್ (GBDA) ಹೆಸರಿನಲ್ಲಿ ಸರ್ಕಾರ ನಡೆಸುತ್ತಿರುವ ಅನ್ಯಾಯದ ಭೂಸ್ವಾಧೀನದ ವಿರುದ್ಧ ನಮ್ಮ ಹೋರಾಟ ಈಗ ಬೀದಿಗೆ!
ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ ಸಂತ್ರಸ್ತ ರೈತರೊಂದಿಗೆ ಸೇರಿ ಜೂನ್ 21, 2026 ರಂದು ಯೋಜನೆಯ ವ್ಯಾಪ್ತಿಯ 26 ಹಳ್ಳಿಗಳಲ್ಲಿ ಬೃಹತ್ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ.
ಖಾಸಗಿ ರಿಯಲ್ ಎಸ್ಟೇಟ್ ಹಿತಾಸಕ್ತಿಗಾಗಿ ಅನ್ನ ನೀಡುವ ರೈತರ ಫಲವತ್ತಾದ ಭೂಮಿಯನ್ನು ಕಸಿದುಕೊಳ್ಳಲು ನಾವು ಬಿಡುವುದಿಲ್ಲ. ಇದು ಕೇವಲ ಭೂಮಿಯ ಹೋರಾಟವಲ್ಲ, ರೈತರ ಬದುಕಿನ ಹೋರಾಟ. ಹೆಚ್ಚಿನ ಸಂಖ್ಯೆಯಲ್ಲಿ ರೈತ ಬಾಂಧವರು ಭಾಗವಹಿಸಿ, ಈ ಹೋರಾಟವನ್ನು ಯಶಸ್ವಿಗೊಳಿಸಿ!