ಇಂದು ಬೆಂಗಳೂರಿನ ರಾಜಾಜಿನಗರದಲ್ಲಿರುವ ಕೆಎಲ್ಇ ಸೊಸೈಟಿಯ ಶಾಲೆಯನ್ನು ಕೆಎಲ್ಇ ಸೊಸೈಟಿಯ ಶ್ರೀ ಕೆ.ಎಫ್. ಪಾಟೀಲ್ ಶಾಲೆ ಎಂದು ಮರುನಾಮಕರಣ ಮಾಡುವ ಶುಭ ಸಮಾರಂಭದಲ್ಲಿ ಪಾಲ್ಗೊಂಡ ಕ್ಷಣಗಳು.
KLE ಸಂಸ್ಥೆ ದೇಶದ ಪ್ರಮುಖ ಶಿಕ್ಷಣ ಸಂಸ್ಥೆಗಳಲ್ಲೊಂದು ಆಗಿದ್ದು, ಗುಣಮಟ್ಟದ ಶಿಕ್ಷಣ, ನೈತಿಕ ಮೌಲ್ಯಗಳು ಮತ್ತು ಆಧುನಿಕ ತಂತ್ರಜ್ಞಾನಾಧಾರಿತ ಕಲಿಕೆಯನ್ನು ಒಟ್ಟುಗೂಡಿಸಿ ವಿದ್ಯಾರ್ಥಿಗಳ ಸಮಗ್ರ ಅಭಿವೃದ್ಧಿಗೆ ನಿರಂತರವಾಗಿ ಸೇವೆ ಸಲ್ಲಿಸುತ್ತಿದೆ. ವಿದ್ಯಾರ್ಥಿಗಳಲ್ಲಿ ಶಿಸ್ತು, ಜ್ಞಾನ ಮತ್ತು ನಾಯಕತ್ವ ಗುಣಗಳನ್ನು ಬೆಳೆಸುವ ಮೂಲಕ ಭವಿಷ್ಯದ ಸಶಕ್ತ ನಾಗರಿಕರನ್ನು ರೂಪಿಸುವಲ್ಲಿ ಮಹತ್ವದ ಪಾತ್ರವಹಿಸುತ್ತಿದೆ. ಶಿಕ್ಷಣದ ಮೂಲಕ ಸದೃಢ ಸಮಾಜ ನಿರ್ಮಾಣ ಮಾಡುವ ಕೆ.ಎಲ್.ಇ ಸಂಸ್ಥೆಯ ಕಾರ್ಯ ಶ್ಲಾಘನೀಯ.
ಮಕ್ಕಳನ್ನು ಕೇವಲ ಶಾಲೆಗೆ ಕಳುಹಿಸುವುದು ಮಾತ್ರವಲ್ಲ, ಮಕ್ಕಳಿಗೆ ಶಿಕ್ಷಣದ ಜೊತೆ ಭಾರತದ ಸಾಂಸ್ಕೃತಿಕ ವಿರಾಸತ್, ಸಾಂಸ್ಕೃತಿಕತೆಯನ್ನು ಕಲಿಸಬೇಕಿದೆ. ಮಕ್ಕಳಿಗೆ ಶಿಕ್ಷಣ ವಿವೇಕತೆಯ ದಾರಿಯನ್ನು ತೋರುತ್ತದೆ. ದೇಶಕ್ಕೆ ಇಂತಹ ವಿವೇಕರ ಕೊಡುಗೆ ಅಪಾರ. ಸಿದ್ದಗಂಗಾ ಮಠದ ಶ್ರೀ ಸಿದ್ದಗಂಗಾ ಮಹಾಸ್ವಾಮಿಗಳು, ಶ್ರೀ ಪುಟ್ಟರಾಜ ಗವಾಯಿಗಳು, ಶ್ರೀ ರಾಮಕೃಷ್ಣ ಪರಮಹಂಸರು ಸ್ವಾಮಿ ವಿವೇಕಾನಂದರ ಜೀವನ ರೂಪುಗೊಂಡರ ಬಗ್ಗೆ ಈ ವೇಳೆ ಪೋಷಕರು, ಶಿಕ್ಷಕರಿಗೆ ಕಿವಿ ಮಾತು ಹೇಳಿದೆನು.
ಈ ಸಂದರ್ಭದಲ್ಲಿ ಕರ್ನಾಟಕ ವಿಧಾನಸಭೆಯ ಉಪ ಸಭಾಪತಿಗಳಾದ ಶ್ರೀ ರುದ್ರಪ್ಪ ಲಮಾಣಿ, KAHER ಬೆಳಗಾವಿ ಹಾಗೂ KLETECH ಹುಬ್ಬಳ್ಳಿ ಕುಲಪತಿಗಳಾದ ಡಾ. ಪ್ರಭಾಕರ್ ಬಿ. ಕೊರೆ
@prabhakarbkore, ಬೆಂಗಳೂರು ದಕ್ಷಿಣದ ಜಿಲ್ಲಾಧಿಕಾರಿ ಶ್ರೀ ಯಶವಂತ ಗುರುಕರ್, ಮುಂಬೈ ಖ್ಯಾತ ಚಿತ್ರ ನಿರ್ಮಾಪಕಿ ಹಾಗೂ ಲೈಫ್ ಕೋಚ್ ಶ್ರೀಮತಿ ಅರುಣಾರಾಜೆ ಪಾಟೀಲ, ಕೆ.ಎಲ್.ಇ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಮಹಾಂತೇಶ್ ಕೌಜಲಗಿ, ಬೆಳಗಾವಿ ಕೆಎಲ್ಇ ಸೊಸೈಟಿ ಆಡಳಿತ ಮಂಡಳಿಯ ಅಧ್ಯಕ್ಷರಾದ ಅಮಿತ್ ಪಿ ಕೋರೆ, ಕಾರ್ಯದರ್ಶಿಗಳಾದ ಶ್ರೀ ದೇಸಾಯಿ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.