ನನ್ನ ಕ್ಷೇತ್ರದ ಜನ ವಿಧಾನಸೌಧದ ಮೆಟ್ಟಿಲು ಹತ್ತಿಸಿದ್ದಾರೆ.ಕಳೆದ 40 ವರ್ಷಗಳಿಂದ ಬೆಳೆಸಿದ್ದಾರೆ ಮೊದಲು ಅವರಿಗೆ ಕೃತಜ್ಞತೆ ಸಲ್ಲಿಸಬೇಕಾಗಿರೋದು ನನ್ನ ಕರ್ತವ್ಯ.
40 ವರ್ಷಗಳ ರಾಜಕೀಯ ಪಯಣ… ಇದಕ್ಕೆ ಮುಖ್ಯ ಅಡಿಪಾಯ ಹಾಕಿದವರು ಕನಕಪುರದ ಕ್ಷೇತ್ರದ ಮಹಾಜನತೆ. ಹೀಗಾಗಿ ಇಂದು ಹಾರೋಹಳ್ಳಿ ಸರ್ಕಲ್, ತುಂಗಣಿ, ಟಿ. ಬೇಕುಪ್ಪೆ ಸರ್ಕಲ್, ನಾರಾಯಣಪುರ, ಕೋಡಿಹಳ್ಳಿ, ಹೇರಿಂದ್ಯಾಪನಹಳ್ಳಿ, ಕೊಳಗೊಂಡನಹಳ್ಳಿ, ಹುಣಸನಹಳ್ಳಿ ಹಾಗೂ ಹೊಸದುರ್ಗ ಗ್ರಾಮಗಳಿಗೆ ಭೇಟಿ ನೀಡಿ, ವಿಧಾನಸೌಧದ ಮೆಟ್ಟಿಲು ಹತ್ತಿಸಿರುವ ನನ್ನ ಜನರಿಗೆ ಕೃತಜ್ಞತೆಯನ್ನು ಸಲ್ಲಿಸಿ ಮಾತನಾಡಲಾಯಿತು.
8 ಬಾರಿ ನೀವು ನನ್ನನ್ನು ವಿಧಾನಸಭೆಗೆ ಆರಿಸಿ ಕಳಿಸಿದ್ದೀರಿ. ನಿಮ್ಮೆಲ್ಲರ ಆಶೀರ್ವಾದದಿಂದ.. ನಿಮ್ಮೆಲ್ಲರ ಬೆಂಬಲದಿಂದ.. ನಿಮ್ಮೆಲ್ಲರ ಮತದಿಂದ.. ನಿಮ್ಮೆಲ್ಲರ ಪ್ರಯತ್ನದಿಂದ.. ನಿಮ್ಮೆಲ್ಲರ ಪ್ರಾರ್ಥನೆಯಿಂದ.. ನಿಮ್ಮೆಲ್ಲರ ಸಂಕಲ್ಪದಿಂದ.. ರಾಜ್ಯದ ಜನತೆಯ ಸೇವೆ ಮಾಡಲು ಒಂದು ಅವಕಾಶವನ್ನು ಕೊಡಿಸಿದ್ದೀರಿ. ಈ ಅವಕಾಶ ನನ್ನದಲ್ಲ, ಈ ಅವಕಾಶ ನಿಮ್ಮದು.
ನೀವೇ ನನ್ನ ಬಲ… ನೀವೇ ನನ್ನ ಭರವಸೆ.
ನಿಮ್ಮ ಪ್ರೀತಿಗೆ ಸದಾ ಚಿರಋಣಿ.