Joined June 2019
1,543 Photos and videos
ಮಾನ್ಯ @RAshokaBJP ಅವರೇ, ವಿರೋಧ ಪಕ್ಷದ ನಾಯಕರಾಗಿ ಈ ನಾಡಿನ ಮುಖ್ಯಮಂತ್ರಿಗಳನ್ನು “ದಲ್ಲಾಳಿ” ಎಂದು ಸಂಬೋಧಿಸಿ ಮಾತನಾಡುವುದು ಎಷ್ಟರ ಮಟ್ಟಿಗೆ ಸಮಂಜಸ ಎಂಬುದನ್ನು ತಾವೇ ಒಮ್ಮೆ ಆತ್ಮಾವಲೋಕನ ಮಾಡಿಕೊಳ್ಳಬೇಕು. ನೀವು ವಿರೋಧ ಪಕ್ಷದ ನಾಯಕರಾಗಿದ್ದು, ಶಾಡೋ ಮುಖ್ಯಮಂತ್ರಿಯ ಜವಾಬ್ದಾರಿಯ ಸ್ಥಾನದಲ್ಲಿದ್ದೀರಿ.ಆದರೆ ಇಂತಹ ಹೇಳಿಕೆಗಳು ನಿಮ್ಮ ಸ್ಥಾನಕ್ಕೆ ಶೋಭೆ ತರುವುದಿಲ್ಲ. ಈ ರಾಜ್ಯದ ಮಖ್ಯಮಂತ್ರಿಗಳನ್ನು ದಲ್ಲಾಳಿ ಎಂದು ಕರೆಯುವುದು ಕನ್ನಡನಾಡಿನ ಜನರಿಗೆ ಮತ್ತು ಸಂವಿಧಾನಕ್ಕೆ ಮಾಡುವ ಅಪಮಾನ. ನಿಮ್ಮ ಮಾತುಗಳು, ನಡೆ-ನುಡಿಗಳು ಇತರ ಶಾಸಕರುಗಳಿಗೆ ಮತ್ತು ಯುವಕರಿಗೆ ಆದರ್ಶವಾಗಿರಬೇಕು.ಆ ನಿಟ್ಟಿನಲ್ಲಿ ನಿಮ್ಮ ಮನಸ್ಥಿತಿಯನ್ನು ಬದಲಾಯಿಸಿಕೊಳ್ಳಬೇಕು. ತಾವು ಬಳಸಿದ “ದಲ್ಲಾಳಿ” ಎಂಬ ಪದದಿಂದ ಪ್ರತಿಕ್ರಿಯಿಸುವ ಅನಿವಾರ್ಯತೆ ನನಗೆ ಉಂಟಾಯಿತು, ನನ್ನ ಮಾತುಗಳಿಂದ ನಿಮ್ಮ ಮನಸ್ಸಿಗೆ ನೋವಾಗಿದ್ದರೆ ಕ್ಷಮೆಯಾಚಿಸುತ್ತೇನೆ , ಮುಖ್ಯಮಂತ್ರಿಗಳ ಜಿಲ್ಲೆಯ ಶಾಸಕನಾಗಿ ನಾನು ಮಾತನಾಡಿದ್ದೇನೆ ಹೊರತು ಯಾವುದೇ ಸಚಿವ ಸ್ಥಾನದ ಆಸೆಯಿಂದಲ್ಲ. ಯಾರ ಹಣೆಬರಹವನ್ನು ಯಾರೂ ಬರೆಯಲು ಸಾಧ್ಯವಿಲ್ಲ. ನನ್ನ ಹಣೆಬರಹದಲ್ಲಿ ಬರೆದಿದ್ದರೆ ನಾನು ಸಚಿವನಾಗುತ್ತೇನೆ; ಅದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ. ಮುಂದಿನ ದಿನಗಳಲ್ಲಾದರೂ ಮಾನ್ಯ ಮುಖ್ಯಮಂತ್ರಿಗಳ ಬಗ್ಗೆ ಗೌರವಯುತವಾಗಿ ಮಾತನಾಡುವ ಸದ್ಭುದ್ಧಿಯನ್ನು ತಾಯಿ ಬನಶಂಕರಮ್ಮ ತಮಗೆ ನೀಡಲಿ ಎಂದು ಪ್ರಾರ್ಥಿಸುತ್ತೇನೆ. ತಮ್ಮನ್ನು ಬೈದರೆ ನನಗೆ ಸಚಿವ ಸ್ಥಾನದ ಸಿಗುತ್ತದೆ ಎಂದು ಹೇಳಿದ್ದೀರಿ, ವಿರೋಧಪಕ್ಷದವರಿಗೆ ಬೈದರೆ ಸಚಿವ ಸ್ಥಾನ ಕೊಡುವ ಕೆಟ್ಟ ಸಂಸ್ಕೃತಿ ನಮ್ಮ ಪಕ್ಷದಲ್ಲಿಲ್ಲ. ನನ್ನ ಕೆಲಸ ನೋಡಿ ನನಗೆ ಸಚಿವ ಸ್ಥಾನ ನೀಡಬೇಕೋ ಬೇಡವೋ ಎಂದು ನಮ್ಮ ಮುಖ್ಯಮಂತ್ರಿಗಳು ಮತ್ತು ವರಿಷ್ಠರು ನಿರ್ಧರಿಸುತ್ತಾರೆ. ಬಹುಷಃ ತಾವು ಮುಖ್ಯಮಂತ್ರಿಗಳನ್ನು ಅವಾಚ್ಯ ಶಬ್ದಗಳಿಂದ ಬೈದರೆ ಬಿಜೆಪಿ ಹೈಕಮಾಂಡ್ ತಮ್ಮನ್ನು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಘೋಷಿಸುತ್ತದೆ ಎಂಬ ಭ್ರಮೆಯಲ್ಲಿದ್ದೀರಿ, ತಾಯಿ ಬನಶಂಕರಮ್ಮ ತಮಗೆ ಒಳ್ಳೆಯದನ್ನು ಮಾಡಲಿ ಎಂದು ಶುಭ ಹಾರೈಸುತ್ತೇನೆ.
ಕಳೆದ ಮೂರು ವರ್ಷಗಳಿಂದ ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಲಿ ಎಂದು ವಕಾಲತ್ತು ವಹಿಸಿ, ಮಾಧ್ಯಮಗಳ ಮುಂದೆ ನಿರಂತರವಾಗಿ ಹೇಳಿಕೆ ಕೊಟ್ಟು, ಒಂಟಿ ಕಣ್ಣಲ್ಲಿ ಕಣ್ಣೀರು ಸುರಿಸುತ್ತಿದ್ದ ಮಾಗಡಿ ಶಾಸಕ ಬಾಲಕೃಷ್ಣ ಅವರು, ಈಗ ಮಂತ್ರಿ ಸ್ಥಾನ ಸಿಗದ ಹತಾಶೆಯಿಂದ ವಿರೋಧ ಪಕ್ಷದ ನಾಯಕರನ್ನು ನಿಂದಿಸಲು ಶುರು ಮಾಡಿದ್ದಾರೆ. ನನ್ನನ್ನು ಬೈದರೆ, ತೇಜೋವಧೆ ಮಾಡಿದರೆ ಮಂತ್ರಿ ಸ್ಥಾನ ಸಿಗಬಹುದು ಎನ್ನುವ ಆಸೆಯಿಂದ ತಮ್ಮ ಎಲುಬಿಲ್ಲದ ನಾಲಿಗೆಯನ್ನು ಹರಿಬಿಟ್ಟಿದ್ದಾರೆ. ಮೂರು ವರ್ಷಗಳ ನಿರಂತರ ಅಚಲ ಸ್ವಾಮಿನಿಷ್ಠೆಗಾಗಿ ಅಲ್ಲದಿದ್ದರೂ, ಕನಿಷ್ಠ ನನ್ನನ್ನು ಬೈದಿದ್ದಕ್ಕಾದರೂ ಡಿ.ಕೆ.ಶಿವಕುಮಾರ್ ಅವರು ಬಾಲಕೃಷ್ಣ ಅವರಿಗೆ ಮಂತ್ರಿ ಸ್ಥಾನ ಕೊಡಿಸಲಿ ಎಂದು ಆಶಿಸುತ್ತೇನೆ. ಮಂತ್ರಿ ಸ್ಥಾನ ಸಿಕ್ಕಮೇಲಾದರೂ ಆ ಮಾಗಡಿ ರಂಗನಾಥ ಸ್ವಾಮಿ ಬಾಲಕೃಷ್ಣ ಅವರಿಗೆ ಸದ್ಬುದ್ಧಿ ಕೊಡಲಿ, ಆಚಾರವಿಲ್ಲದ ಅವರ ನಾಲಿಗೆಗೆ ಸ್ವಲ್ಪ ಸದಾಚಾರ ಸಿಗಲಿ ಎಂದು ಪ್ರಾರ್ಥಿಸುತ್ತೇನೆ. @HC_Balakrishna
2
3
26
7,293
ಮಾಜಿ ಮುಖ್ಯಮಂತ್ರಿಗಳು ಹಾಗೂ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ (CWC) ನೂತನ ಸದಸ್ಯರಾದ ಸನ್ಮಾನ್ಯ ಶ್ರೀ @siddaramaiah ಅವರನ್ನು ಇಂದು ಭೇಟಿಯಾಗಿ ಅಭಿನಂದನೆ ಸಲ್ಲಿಸಿದೆ.
1
3
170
7,246
ಅವರ ದೂರದೃಷ್ಟಿಯ ನಾಯಕತ್ವ, ಸಾಮಾಜಿಕ ನ್ಯಾಯದ ಬದ್ಧತೆ ಮತ್ತು ಅಭಿವೃದ್ಧಿ ಪರ ಚಿಂತನೆಗಳು ಮುಂದಿನ ದಿನಗಳಲ್ಲಿಯೂ ನಾಡಿಗೆ ಹಾಗೂ ಪಕ್ಷಕ್ಕೆ ಸ್ಫೂರ್ತಿಯ ಶಕ್ತಿಯಾಗಿ ಮುಂದುವರಿಯಲಿವೆ.
2
405
ನನ್ನ ಮತ ಕ್ಷೇತ್ರದ ಬಿಡದಿಯ ವಂಡರ್ ಲಾ ಗೆ ಆಗಮಿಸಿದ ಎಐಸಿಸಿ ಪ್ರಧಾನ ಕಾರ್ಯದರ್ಶಿಗಳು ಹಾಗೂ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ಶ್ರೀ @rssurjewala ಅವರನ್ನು ಇಂದು ಆತ್ಮೀಯವಾಗಿ ಸ್ವಾಗತಿಸಿ, ಸೌಹಾರ್ದಯುತವಾಗಿ ಮಾತುಕತೆ ನಡೆಸಿದೆ.
2
49
2,139
HC Balakrishna retweeted
Jun 5
#WATCH | Bengaluru: All India Congress Committee (AICC) President Mallikarjun Kharge officially filed his nomination papers for the upcoming Rajya Sabha biennial elections from Karnataka. Congress leader HC Balakrishna says, "...Our AICC President filed the nomination for the Rajya Sabha. That's why we came here to support him..."
1
6
35
5,473

1
195
ರಾಜ್ಯ ಕಾಂಗ್ರೆಸ್ ಪಕ್ಷದ ನೂತನ ಅಧ್ಯಕ್ಷರಾಗಿ ನೇಮಕಗೊಂಡಿರುವ ನಮ್ಮ ಪಕ್ಷದ ಹಿರಿಯ ನಾಯಕರು, ವಿಧಾನಪರಿಷತ್ತಿನ ಸದಸ್ಯರಾದ ಶ್ರೀ @HariprasadBK2 ಅವರನ್ನು ಭೇಟಿಯಾಗಿ ಹೃತ್ಪೂರ್ವಕವಾಗಿ ಅಭಿನಂದಿಸಿದೆ. @INCKarnataka
36
773
ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಶ್ರೀ ಪ್ರಿಯಾಂಕ್ ಖರ್ಗೆ ಅವರನ್ನು ಇಂದು ಭೇಟಿ ಮಾಡಿ ಅಭಿನಂದನೆ ಸಲ್ಲಿಸಿದೆ. @PriyankKharge
7
164
6,714
ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಶ್ರೀ ಸತೀಶ್ ಜಾರಕಿಹೊಳಿ ಅವರನ್ನು ಇಂದು ಭೇಟಿ ಮಾಡಿ ಅಭಿನಂದನೆ ಸಲ್ಲಿಸಿದೆ. @JarkiholiSatish
1
49
1,235
ಎಐಸಿಸಿ ಪ್ರಧಾನ ಕಾರ್ಯದರ್ಶಿಗಳು ಹಾಗೂ ಕರ್ನಾಟಕ ರಾಜ್ಯ ಕಾಂಗ್ರೆಸ್‌ನ ಉಸ್ತುವಾರಿ ಶ್ರೀ ರಣದೀಪ್ ಸಿಂಗ್ ಸುರ್ಜೆವಾಲಾ ಅವರಿಗೆ ಜನ್ಮದಿನದ ಶುಭಾಶಯಗಳು. ಮಾಗಡಿ ರಂಗನಾಥ ಸ್ವಾಮಿ ತಮಗೆ ಉತ್ತಮ ಆಯುರಾರೋಗ್ಯ ಕೊಟ್ಟು, ಜನಸೇವೆ ಮುಂದುವರೆಸಲು ಹೆಚ್ಚಿನ ಶಕ್ತಿ ಕರುಣಿಸಲಿ ಎಂದು ಹಾರೈಸುತ್ತೇನೆ.
1
4
225
Birthday greetings to Sri @rssurjewala AICC General Secretary and the Karnataka Congress In-charge. I wish him good health, happiness, and a long life.
1
136
ದೇಶದ ಮಾಜಿ ಪ್ರಧಾನಿಗಳು, ನಾಡಿನ ಹಿರಿಯರೂ ಆದ ಶ್ರೀ ಹೆಚ್.ಡಿ. ದೇವೇಗೌಡ ಅವರಿಗೆ ಜನ್ಮದಿನದ ಹೃತ್ಪೂರ್ವಕ ಶುಭಾಶಯಗಳು. ಮಾಗಡಿ ರಂಗನಾಥಸ್ವಾಮಿ ತಮಗೆ ಉತ್ತಮ ಆಯುರಾರೋಗ್ಯ, ದೀರ್ಘಾಯುಷ್ಯ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ. @H_D_Devegowda
1
145
ಕರ್ನಾಟಕ ಸರ್ಕಾರದ ಉಪ ಮುಖ್ಯಮಂತ್ರಿಗಳು, ಕೆಪಿಸಿಸಿ ಅಧ್ಯಕ್ಷರಾದ ಶ್ರೀ @DKShivakumar ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು. ಇನ್ನಷ್ಟು ಸುದೀರ್ಘ ಕಾಲ ಜನಸೇವೆ ಮಾಡಲು, ಉತ್ತಮ ಆಯುಷ್ಯ, ಆರೋಗ್ಯವನ್ನು ಮಾಗಡಿ ರಂಗನಾಥಸ್ವಾಮಿ ತಮಗೆ ದಯಪಾಲಿಸಲಿ ಎಂದು ಮನದುಂಬಿ ಹಾರೈಸುತ್ತೇನೆ.
4
118
HC Balakrishna retweeted
ಕಾಂಗ್ರೆಸ್ ಶಾಸಕರು ದೆಹಲಿಗೆ ಹೋಗೋದ್ರಲ್ಲಿ ತಪ್ಪೇನಿದೆ. ಸಂಪುಟ ಪುನಾರಚನೆ ಆಗಬಹುದು ಎಂಬ ವಿಶ್ವಾಸ ಇದೆ. ಅಂತಿಮ ನಿರ್ಧಾರ ಹೈಕಮಾಂಡ್‌ಗೆ ಬಿಟ್ಟಿದ್ದು. ನಾನು ಸನ್ಯಾಸಿ ಅಲ್ಲ, ನಾನು ಐದು ಬಾರಿ ಶಾಸಕನಾಗಿದ್ದೇನೆ. ನನಗೂ ಆಸೆ ಸಹಜವಾಗಿ ಇದೆ ಎಂದು ಸಚಿವ ಸ್ಥಾನ ಆಸೆ ಬಿಚ್ಚಿಟ್ಟ ಶಾಸಕ HC ಬಾಲಕೃಷ್ಣ. @HC_Balakrishna #HCBalaKrishna
1
5
497
ಬೆಂಗಳೂರು ಹಾಲು ಒಕ್ಕೂಟದ ಹಾಲು ಉತ್ಪಾದಕರಿಗೆ ಪ್ರತಿ ಲೀಟರ್ ಹಾಲಿನ ಮೇಲೆ ₹1 ಪ್ರೋತ್ಸಾಹಧನವನ್ನು ನೀಡುವ ಮಹತ್ವದ ನಿರ್ಧಾರವನ್ನು ಘೋಷಣೆ ಮಾಡಿರುವ ಒಕ್ಕೂಟದ ಅಧ್ಯಕ್ಷರಾದ ಶ್ರೀ @DKSureshINC ರವರಿಗೆ ಹಾಗೂ ಒಕ್ಕೂಟದ ಎಲ್ಲಾ ನಿರ್ದೇಶಕರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು.
1
1
124
ರೈತರ ಕಲ್ಯಾಣದ ಬಗ್ಗೆ ಸದಾ ಕಾಳಜಿ ವಹಿಸಿ ಇಂತಹ ಉತ್ತಮ ಯೋಜನೆಗಳನ್ನು ಜಾರಿಗೆ ತರುತ್ತಿರುವ ಬೆಂಗಳೂರು ಹಾಲು ಒಕ್ಕೂಟದ ಅಧ್ಯಕ್ಷರು ಹಾಗೂ ನಿರ್ದೇಶಕರ ತಂಡಕ್ಕೆ ಮತ್ತೊಮ್ಮೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಅವರ ಈ ಕ್ರಮದಿಂದ ಹಾಲು ಉತ್ಪಾದಕರಿಗೆ ಇನ್ನಷ್ಟು ಉತ್ತೇಜನ ಸಿಗಲಿ ಎಂದು ಆಶಿಸುತ್ತೇನೆ.
1
91
ಕಾರ್ಮಿಕ ಇಲಾಖೆ ಸಚಿವರು, ಆತ್ಮೀಯ ಸ್ನೇಹಿತರೂ ಆದ ಶ್ರೀ ಸಂತೋಷ್ ಲಾಡ್ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು. ಮಾಗಡಿ ರಂಗನಾಥ ಸ್ವಾಮಿ ತಮಗೆ ಉತ್ತಮ ಆಯುರಾರೋಗ್ಯ ಕೊಟ್ಟು, ಜನಸೇವೆ ಮುಂದುವರೆಸಲು ಹೆಚ್ಚಿನ ಶಕ್ತಿ ಕರುಣಿಸಲಿ ಎಂದು ಹಾರೈಸುತ್ತೇನೆ. @SantoshSLadINC
1
1
7
388
ಮಾಗಡಿ ಕ್ಷೇತ್ರ ಹಾಗೂ ನಾಡಿನ‌ ಸಮಸ್ತ ಜನತೆಗೆ ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು. ಈ ಸಂಕ್ರಮಣ ನಮ್ಮೆಲ್ಲಾ ನೋವು, ಕಷ್ಟ - ನಷ್ಟಗಳನ್ನು ನಿವಾರಿಸಲಿ. ಸಕಾಲಕ್ಕೆ ಉತ್ತಮ ಮಳೆ, ಬೆಳೆಯಾಗಿ ಎಲ್ಲರ ಬದುಕು ಹಸನಾಗಲಿ. ಈ ಸುಗ್ಗಿಯ ಪರ್ವ ಎಲ್ಲಾರಿಗೂ ಸುಖ, ಸಮೃದ್ಧಿ, ಸೌಹಾರ್ದ, ಸದ್ಭಾವನೆಯನ್ನು ನೆಲೆಗೊಳಿಸಲೆಂದು ಹಾರೈಸುತ್ತೇನೆ.
4
254
ನಿಕಟಪೂರ್ವ ಸಂಸದರು, ಬೆಂಗಳೂರು ಸಹಕಾರ ಹಾಲು ಒಕ್ಕೂಟದ ಅಧ್ಯಕ್ಷರಾದ ಶ್ರೀ @DKSureshINC ಅವರಿಗೆ ಜನ್ಮದಿನದ ಶುಭಾಶಯಗಳು. ಇನ್ನಷ್ಟು ಸುದೀರ್ಘ ಕಾಲ ಜನಸೇವೆ ಮಾಡಲು, ಉತ್ತಮ ಆಯುಷ್ಯ, ಆರೋಗ್ಯವನ್ನು ಮಾಗಡಿ ರಂಗನಾಥಸ್ವಾಮಿ ತಮಗೆ ದಯಪಾಲಿಸಲಿ ಎಂದು ಮನದುಂಬಿ ಹಾರೈಸುತ್ತೇನೆ.
1
2
6
568
HC Balakrishna retweeted
28 Nov 2025
#NDTVExclusive | "Hopeful DK Shivakumar will take oath as Chief Minister" : Karnataka MLA HC Balakrishna (@HC_Balakrishna) speaks to NDTV's @reethu_journo
1
2
7
2,483