ಶಕ್ತಿ ಯೋಜನೆಯ ಹೊರೆದಿಂದ ನಿಶ್ಯಕ್ತಗೊಂಡಿರುವ ರಾಜ್ಯದ ಸಾರಿಗೆ ನಿಗಮಗಳು ಇಂದು ಸಂಪೂರ್ಣ ಕುಸಿತದ ಅಂಚಿಗೆ ತಲುಪಿವೆ.
ಮೇ 20ರಿಂದ ಮತ್ತೊಮ್ಮೆ ಸಾರಿಗೆ ನೌಕರರು ಮುಷ್ಕರಕ್ಕೆ ಮುಂದಾಗಿರುವುದು
@INCKarnataka ಸರ್ಕಾರದ ದಿವಾಳಿತನದ ಆಡಳಿತಕ್ಕೆ ಜೀವಂತ ಸಾಕ್ಷಿ. ಶೇ 25ರಷ್ಟು ವೇತನ ಹೆಚ್ಚಳಕ್ಕೆ ಬೇಡಿಕೆ ಇಟ್ಟಿದ್ದ ನೌಕರರಿಗೆ, ಏಕಪಕ್ಷೀಯವಾಗಿ ಕೇವಲ 12.5% ಹೆಚ್ಚಳ ಘೋಷಿಸಿರುವುದು ನೌಕರರ ಹೋರಾಟಕ್ಕೆ ಮಾಡಿದ ಅವಮಾನ.
ಕೇವಲ ಚುನಾವಣಾ ಲಾಭಕ್ಕಾಗಿ ಗ್ಯಾರೆಂಟಿಗಳ ಹೆಸರಿನಲ್ಲಿ ರಾಜ್ಯದ ಬೊಕ್ಕಸ ಖಾಲಿ ಮಾಡಿದ
@siddaramaiah ಸರ್ಕಾರಕ್ಕೆ, ಈಗ ನೌಕರರ ಸಂಬಳಕ್ಕೂ ಹಣವಿಲ್ಲದ ಸ್ಥಿತಿ ನಿರ್ಮಾಣವಾಗಿದೆ.
ಸಾರಿಗೆ ಸಚಿವ
@RLR_BTM ಅವರು ನೌಕರರ ಸಂಕಷ್ಟಗಳಿಗೆ ಸ್ಪಂದಿಸುವ ಬದಲು ದಿವ್ಯ ಮೌನ ವಹಿಸಿರುವುದು ಸರ್ಕಾರದ ನಿರ್ಲಕ್ಷ್ಯ ಮತ್ತು ಅಸಮರ್ಥತೆಯ ಪರಾಕಾಷ್ಠೆ.
ಸಾರಿಗೆ ನೌಕರರು ಪದೇ ಪದೇ ಬೀದಿಗಿಳಿದರೂ Dont Care ಎನ್ನದಿರುವ ಕಾಂಗ್ರೆಸ್ ಸರ್ಕಾರ ತನ್ನ ಕಾರ್ಮಿಕ ವಿರೋಧಿ ಧೋರಣೆಯನ್ನ ಈಗಾಗಲೇ ಅನೇಕ ಸಲ ಪ್ರದರ್ಶನ ಮಾಡಿದೆ. ಈಗ ನೌಕರರ ಮುಷ್ಕರದಿಂದ ರಾಜ್ಯದ ಸಾರ್ವಜನಿಕ ಸಾರಿಗೆ ವ್ಯವಸ್ಥೆಯೇ ಬುಡಮೇಲು ಆಗುತ್ತಿದ್ದರೂ ಕ್ಯಾರೆ ಅನ್ನದೆ ಏಕಪಕ್ಷೀಯವಾಗಿ ನಿರ್ಧಾರಗಳನ್ನು ಕೈಗೊಂಡು ನೌಕರರನ್ನು ಕೆರಳಿಸುತ್ತಿರುವುದು ಕನ್ನಡಿಗರ ದುರಂತ.